ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜತೆ ಸಂಸಾರ.!

ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜತೆ ಸಂಸಾರ.!

ಕೊಪ್ಪಳದಲ್ಲಿ ಗುರುವಿನ ವಿರುದ್ಧ ಪ್ರಕರಣ ದಾಖಲು.

ಕೊಪ್ಪಳ: ವಿದ್ಯೆ ಕಲಿಸಬೇಕಾದ ಗುರುವೇ ಇಲ್ಲಿ ಕಾಮಪಿಶಾಚಿಯಾಗಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಸ್ವಂತ ಅತ್ತೆ ಮಗಳನ್ನೇ ಐದು ವರ್ಷಗಳಿಂದ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಈಗ ಕೈಕೊಟ್ಟಿದ್ದಾನೆ. ಅಲ್ಲದೇ ಮತ್ತೊಬ್ಬಳ ಜೊತೆ ಮದುವೆಯಾಗಿದ್ದಾನೆ. ಹೌದು…ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಬಸವರಾಜ ಎನ್ನುವ ಸರ್ಕಾರಿ ಶಿಕ್ಷಕ, ಅತ್ತೆ ಮಗಳ ಜೊತೆ ಹಿರಿಯರ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದ್ರೆ, ಇದೀಗ ಬಸವರಾಜ ಮತ್ತೋರ್ವಳ ಜೊತೆ ಮದುವೆಯಾಗಿದ್ದು, ವಿವಾಹ ನೋಂದಣಿ ಪತ್ರವನ್ನು ಅತ್ತೆ ಮಗಳಿಗೆ ಕಳುಹಿಸಿದ್ದಾನೆ. ಇದರಿಂದ ಕಂಗಾಲದ ಯುವತಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಸರಕಾರಿ ಶಿಕ್ಷಕನಾಗಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಬಸವರಾಜ ಹರಿಜನ್ ಎಂಬಾತ ತನ್ನ ನೈತಿಕತೆಯನ್ನೇ ಮರೆತು ವರ್ತಿಸಿದ್ದಾನೆ. ಹುಲಸನಟ್ಟಿ ಮೂಲದ ಯುವತಿ ಕರೆಮ್ಮಾ ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗಿನಿಂದಲೂ ಬಸವರಾಜನ ಜೊತೆ ಸಂಪರ್ಕವಿತ್ತು. ಸ್ವಂತ ಅತ್ತೆ ಮಗ ಎನ್ನುವ ಕಾರಣಕ್ಕೆ ಯುವತಿ ಆತನನ್ನು ಕುರುಡಾಗಿ ನಂಬಿದ್ದಳು. ನೌಕರಿ ಸಿಕ್ಕ ತಕ್ಷಣ ಮದುವೆಯಾಗುವುದಾಗಿ ನಂಬಿಸಿದ್ದ ಬಸವರಾಜ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇಷ್ಟೇ ಅಲ್ಲದೆ, ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ. ಆದರೆ, ಯಾವಾಗ ಸರಕಾರಿ ಶಿಕ್ಷಕನ ನೌಕರಿ ಭದ್ರವಾಯಿತೋ, ಆಗ ಈತನ ಬುದ್ಧಿ ಬದಲಾಗಿದೆ. ಪ್ರೀತಿಸಿದ ಅತ್ತೆ ಮಗಳನ್ನು ನಡುನೀರಲ್ಲಿ ಬಿಟ್ಟು, ರತ್ನವ್ವ ಎಂಬ ಯುವತಿಯೊಂದಿಗೆ ರಹಸ್ಯವಾಗಿ ವಿವಾಹವಾಗಿದ್ದಾನೆ.

ಮೋಸ ಮಾಡಿದ್ದಷ್ಟೇ ಅಲ್ಲದೆ ಬಸವರಾಜ, ರತ್ನವ್ವಳೊಂದಿಗೆ ತಾನು ಮಾಡಿಕೊಂಡ ಮದುವೆಯ ನೋಂದಣಿ ಪತ್ರವನ್ನು ಸಂತ್ರಸ್ತ ಯುವತಿಯ ಮನೆಗೆ ಕಳುಹಿಸಿದ್ದಾನೆ. ಇದರಿಂದ ಕಂಗಾಲಾದ ಯುವತಿ ಮತ್ತು ಆಕೆಯ ಪೋಷಕರು ಈಗ ನ್ಯಾಯಕ್ಕಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹಿರಿಯರ ಸಮ್ಮುಖದಲ್ಲಿ ನಿಶ್ವಯ ಮಾಡಿಕೊಂಡು ಇದೀಗ ಮತ್ತೊಂದು ಮದುವೆಯಾಗಿರುವ ಬಸವರಾಜ್ ಗೆ ತಕ್ಕ ಶಿಕ್ಷೆ ಆಗಬೇಕು ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *