ಮಾರ್ಕೋನಹಳ್ಳಿ ಜಲಾಶಯ ಭರ್ತಿ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಮಾರ್ಕೋನಹಳ್ಳಿ ಜಲಾಶಯ ಭರ್ತಿ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ತುಮಕೂರು:- ನಿರಂತರ ಮಳೆಗೆ ಮಾರ್ಕೋನಹಳ್ಳಿ ಕಿರು ಜಲಾಶಯ ಭರ್ತಿಯಾಗಿದ್ದು,  ಸ್ವಯಂ ಚಾಲಿತ ಸೈಫನ್ ಮೂಲಕ ನೀರು ಹೊರಕ್ಕೆ ಬಿಡಲಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಪ್ರಸಿದ್ಧ ಮಾರ್ಕೋನಹಳ್ಳಿ ಜಲಾಶಯಕ್ಕೆ‌

1527 ಕ್ಯೂಸೆಕ್ ಒಳ ಹರಿವಿನ ಪ್ರಮಾಣ ಬರುತ್ತಿದೆ. ಹೀಗಾಗಿ

ಜಲಾಶಯಕ್ಕೆ ಒಳಹರಿವು ಹೆಚ್ಚಳ ಹಿನ್ನೆಲೆ ಸ್ವಯಂ ಚಾಲಿತ ಸೈಫನ್ ಓಪನ್ ಮಾಡಿ ನೀರು ಬಿಡಲಾಗಿದೆ.

ಎರಡು ಸ್ವಯಂ ಚಾಲಿತ ಸೈಫನ್ ಲಾಕ್ ಓಪನ್ ಮಾಡಲಾಗಿದೆ. ಒಟ್ಟು 2.4 ಟಿಎಂ ಸಿ ಸಾಮರ್ಥ್ಯದ ಜಲಾಶಯ ಇದಾಗಿದ್ದು, ಹೆಚ್ಚು ನೀರು ಜಲಾಶಯಕ್ಕೆ ಹರಿವು ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ  ನೀಡಲಾಗಿದೆ.

ಮಾರ್ಕೋನಹಳ್ಳಿ, ಕಾಡುಶೆಟ್ಟಿಹಳ್ಳಿ,ಬಿಸಿನೆಲೆ,ತೊರೆಹಳ್ಳಿ ಸೇರಿ ಅಕ್ಕ-ಪಕ್ಕದ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಜಲಾಶಯ ತುಂಬಿದ ಹಿನ್ನೆಲೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ರಿಂದ ಜಲಾಶಯಕ್ಕೆ ‌ಬಾಗಿನ ಅರ್ಪಣೆ ಕಾರ್ಯಕ್ರಮ ಕೂಡ ಇದೆ. ಮಾರ್ಕೋನಹಳ್ಳಿ ಜಲಾಶಯ, ಕುಣಿಗಲ್ ದೊಡ್ಡಕೆರೆಗೆ  ಶಾಸಕ ಹಾಗೂ ಮಾಜಿ ಸಂಸದರು ಬಾಗಿನ ಅರ್ಪಿಸಲಿದ್ದಾರೆ.

Leave a Reply

Your email address will not be published. Required fields are marked *