ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿಗೆ ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್ ಅನುದಾನ ಬಿಡುಗಡೆ ಮಾಡಿದ್ದಾರೆ. ಶಾಸಕರ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಡಿಕೆ ಶಿವಕುಮಾರ್, ತಗ್ಗಿ ಬಗ್ಗಿ ನಡೆದುಕೊಳ್ಳಬೇಕು ಎಂದು ಗರಂ ಆಗಿದ್ದರು. ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವನ್ನು ಡಿಕೆ ಶಿವಕುಮಾರ್
ವಹಿಸಿಕೊಂಡ ಬಳಿಕ ಬೆಂಗಳೂರು ಅದೋಗತಿ ಆಗಿದೆ ಎಂದು ಜಯನಗರ ಶಾಸಕ ಸಿಕೆ ರಾಮಮೂರ್ತಿ ಹೇಳಿಕೆ ನೀಡಿದ್ದರು. ಇದು ಡಿಕೆ ಶಿವಕುಮಾರ್ ಆಕ್ರೋಶಕ್ಕೆ ಕಾರಣವಾಗಿತ್ತು.
ನಾನು ಉಸ್ತುವಾರಿ ಸಚಿವನಾದ ಬಳಿಕ ಬೆಂಗಳೂರಿನಲ್ಲಿ ಏನು ಅದೋಗತಿ ಆಗಿದೆ ಎಂದು ಶಾಸಕರು ಹೇಳಲಿ ಆಗ ನಾನು ಅನುದಾನ ಬಿಡುಗಡೆ ಮಾಡ್ತೀನಿ ಎಂದು ಅನುದಾನ ತಡೆಹಿಡೆಯಲಾಗಿತ್ತು. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಬೆಂಗಳೂರಿನಲ್ಲಿ ನಡೆದ ವಕ್ಫ್ ವಿರೋಧಿ ಹೋರಾಟದಲ್ಲೂ ಈ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದ ಶಾಸಕ ಮುನಿರತ್ನ ಡಿಕೆ ಶಿವಕುಮಾರ್ ಗೆ ಟಾಂಗ್ ನೀಡಿದ್ದರು. ಆದರೆ ಇದೀಗ ಕೊನೆಗೂ ಡಿಕೆ ಶಿವಕುಮಾರ್ ಅವರು ಅನುದಾನ ಬಿಡುಗಡೆ ಮಾಡಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಲ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಈ ಹಿಂದೆ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.ಆದರೆ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನುದಾನ ತಡೆಹಿಡಿಯಲಾಗಿತ್ತು.
ಡಿಸಿಎಂ ನಡೆಗೆ ಆಕ್ರೋಶ
ಜಯನಗರ ಕ್ಷೇತ್ರದ ಅನುದಾನ ತಡೆಹಿಡಿದಿದ್ದಕ್ಕೆ ಬಿಜೆಪಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿತ್ತು. ಡಿಸಿಎಂ ಈ ನಡೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಇದೀಗ ಕೊನೆಗೂ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ
10 ಕೋಟಿ ಅನುದಾನ ಬಿಡುಗಡೆ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಶಾಸಕರ ಜೊತೆ ಚರ್ಚೆಸಿ ಬಿಡುಗಡೆ ಮಾಡಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದ ಮಹತ್ವಪೂರ್ಣ ಹಾಗೂ ಅತೀ ಅವಶ್ಯಕತೆ ಇರುವ ಯೋಜನೆ ಗಳ ಕ್ರಿಯ ಯೋಜನೆ ರೂಪಿಸಿ ಯೋಜನೆ ಕೈಗೆತ್ತುಕೊಳ್ಳಲು ಬಿಬಿಎಂಪಿ ಆಯುಕ್ತರಿಗೆ ಪತ್ರ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಬಳ್ಳಾರಿ ಬಾಣಂತಿಯರ ಸಾವು: ಸಿದ್ದರಾಮಯ್ಯ ರಾಜೀನಾಮೆ ಕೊಡಲಿ, ಲೋಕಾಯುಕ್ತ ತನಿಖೆಯಾಗಲಿ: ಆರ್ ಅಶೋಕ್ ಆಗ್ರಹ
ಬೆಂಗಳೂರು: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ರಾಜೀನಾಮೆ ಕೊಡುವುದಲ್ಲ, ಬದಲಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಈ ಪ್ರಕರಣದ ಕುರಿತಾಗಿ ಲೋಕಾಯುಕ್ತ ತನಿಖೆಯಾಗಲಿ ಎಂದು ಒತ್ತಾಯಿಸಿದರು. ಈ ವಿಚಾರವಾಗಿ
ಲೋಕಾಯುಕ್ತ ತನಿಖೆಗೆ ಪತ್ರವನ್ನು ಕೊಡುತ್ತೇನೆ ಹಾಗೂ ತನಿಖೆಗೆ ಆಗ್ರಹಿಸುತ್ತೇನೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ. ಮೃತರ ಮನೆಗೆ ದಿನೇಶ್ ಗುಂಡೂರಾವ್ ಏಕೆ ಭೇಟಿ ಕೊಟ್ಟಿಲ್ಲ. ನಾನು ರಾಜೀನಾಮೆಗೆ ಸಿದ್ದ ಎಂದು ಹೇಳುವ ದಿನೇಶ್ ಗುಂಡೂರಾವ್ ಹೇಳಿಕೆ ನುಣುಚಿಕೊಳ್ಳುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ಕಳಪೆ ಆಗಿದ್ದ ರಿಂಗರ್ ಲ್ಯಾಕ್ವೆಟ್ ದ್ರಾವಣ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ. 28 ಬಾಣಂತಿಯರು ಎಂಟು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಮಹಿಳೆಯರಿಗೆ ಎರಡು ಸಾವಿರ ರೂಪಯಿ ಬೇಡಾ ಬದಲಾಗಿ ಸಾವಿಗೆ ನ್ಯಾಯ ಕೊಡಿ ಎಂದರು.
ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸಾವಿಗೆ ಡಿಕೆಶಿ ಕಣ್ಣೀರು ಹಾಕಿದ್ದರು. ಆದರೆ ಇದೀಗ ಒಂದು ತೊಟ್ಟು ಕಣ್ಣೀರು ಹಾಕಿದ್ದಾರಾ ಡಿಕೆಶಿ? ಎಂದು ಪ್ರಶ್ನಿಸಿದರು. ಬಾಣಂತಿಯರ ಸಾವಿನ ದಿನವೇ ಹಾಸನದಲ್ಲಿ ಸಮಾವೇಶ ಮಾಡಲಾಗಿದೆ. ಸಿದ್ದರಾಮಯ್ಯ ಪರವಾದ ಸಮಾವೇಶ ಮಾಡಲಾಗಿದೆ ಎಂದು ಕಿಡಿಕಾರಿದರು.
ಈ ಸಮಾವೇಶದಲ್ಲಿ ಜನರ ಪರವಾಗಿ ಒಂದೇ ಒಂದು ಮಾತನ್ನು ಆಡಿದ್ದೀರಾ? ದೇವೇಗೌಡರ ವಿರುದ್ಧ ಮಾತನಾಡಿದ್ದು ಬಿಟ್ಟರೆ ಬಾಣಂತಿಯರ ಸಾವಿನ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರಾ? ಕಳಪೆ ಔಷಧಿ ಕಂಪನಿಯ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ಬಾಣಂತಿಯರ ಸಾವಿಗೆ ಕಾರಣ ದ್ರಾವಣವೇ. ಇದನ್ನು ಅಲ್ಲಿಯ ವೈದ್ಯರು ದೃಢಪಡಿಸಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯಗೆ ಕರುಣೆ ಬೇಡಬೇ? ನೂರು ಸಮಾವೇಶ ಮಾಡಿದರೂ ಇದರ ಶಾಪ ಪಾಪದಿಂದ ನರಳಿ ಸರ್ಕಾರ ಸತ್ತು ಹೋಗುತ್ತದೆ ಎಂದು ಕಿಡಿಕಾರಿದರು.
ಸಮಾವೇಶ ಕ್ಕೆ 20 ಕೋಟಿ ಖರ್ಚು ಆಗಿದೆ. ಅದು ಎಲ್ಲಿಂದ ಬಂತು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಕಾಟಾಚಾರದ ಸಭೆ ನಡೆಸಿ ಬ್ಲಾಕ್ ಲಿಸ್ಟ್ ಗೆ ಕಂಪನಿ ಸೇರಿಸಲಾಗಿದೆ ಎಂದಿದ್ದಾರೆ. ಸಿಎಂ ಸಭೆ ಬಳಿಕವೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ಏನು ಅರ್ಥ ಎಂದು ಆತಂಕ ವ್ಯಕ್ತಪಡಿಸಿದರು.