ತುಮಕೂರು || ತೆಂಗು ಬೆಳೆಗಾರರೇ ಗಮನಿಸಿ, ಬೆಳೆ ವಿಮಾ ಯೋಜನೆ

ತುಮಕೂರು || ತೆಂಗು ಬೆಳೆಗಾರರೇ ಗಮನಿಸಿ, ಬೆಳೆ ವಿಮಾ ಯೋಜನೆ

ತುಮಕೂರು: ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ತೆಂಗು ಬೆಳೆಯುತ್ತಾರೆ. ಆದರೆ ತೆಂಗಿನ ಗಿಡಗಳು, ಮರಗಳು ವಿವಿಧ ರೋಗಗಳಿಗೆ ತುತ್ತಾಗಿ ರೈತರಿಗೆ ನಷ್ಟವಾಗುತ್ತದೆ. ಆದ್ದರಿದ ತೆಂಗಿನ ಬೆಳೆಗಾರರಿಗೆ ನೆರವಾಗಲು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತೆಂಗು ಬೆಳೆಯುವ ರೈತರು ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.

ತೆಂಗು ಬೆಳೆ ವಿಮಾ ಯೋಜನೆ ತೆಂಗಿನ ಗಿಡ/ ಮರಗಳಿಗೆ ಇರುವ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ಧಿ, ಮಂಡಳಿಯವರು Agriculture insurance company ಅವರ ಸಹಯೋಗದೊಂದಿಗೆ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಆರೋಗ್ಯವಂತ ತೆಂಗಿನ ಗಿಡಗಳು/ ಮರಗಳು (4 ರಿಂದ 60 ವರ್ಷ) ವಿಮೆಯ ವ್ಯಾಪ್ತಿಗೆ ಒಳಪಡುತ್ತವೆ. ರೈತರು ಕನಿಷ್ಠ 5 ತೆಂಗಿನ ಗಿಡಗಳು/ ಮರಗಳನ್ನು ಕಡ್ಡಾಯವಾಗಿ ವಿಮೆಗೆ ಒಳಪಡಿಸಬೇಕು 5ಕ್ಕಿಂತ ಕಡಿಮೆ ಸಂಖ್ಯೆ, ತೆಂಗಿನ ಮರಗಳು/ ಗಿಡಗಳು ಈ ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಹವಾಮಾನ ವೈಪರಿತ್ಯದಿಂದ, ಕೀಟ ಮತ್ತು ರೋಗದಿಂದ, ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದಲ್ಲಿ, ಬರಗಾಲ, ಆಲಿಕಲ್ಲು, ಸಿಡಿಲು ಬಡಿತದಿಂದ ತೆಂಗಿನ ಗಿಡಗಳು/ ಮರಗಳು ಸಂಪೂರ್ಣ ಹಾನಿಯಾಗಿ ಸತ್ತು ಹೋದಲ್ಲಿ ಹಾನಿ ಸಂಭವಿಸಿದ 15 ದಿನಗಳೊಳಗಾಗಿ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿರುತ್ತದೆ.

ಇದೇ ಮಾದರಿಯಲ್ಲಿ 16 ರಿಂದ 60 ವರ್ಷದ ಮರಕ್ಕೆ/ ಗಿಡಕ್ಕೆ 1750 ರೂ.ಗಳು. ಶೇ 25 ರಂತೆ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಪ್ರತಿ ಮರಕ್ಕೆ/ ಗಿಡ/ ವರ್ಷಕ್ಕೆ ಮರಕ್ಕೆ/ ಗಿಡಕ್ಕೆ 3.50 ರೂ., ಸರ್ಕಾರದ ವಂತಿಕೆ ಮರಕ್ಕೆ/ ಗಿಡಕ್ಕೆ ಶೇ 50 ಸಿಬಿಡಿ + ಶೇ 25 ರಾಜ್ಯ ಸರ್ಕಾರ 10.50 ರೂ.ಗಳು.

ಮೇಲೆ ತಿಳಿಸಿರುವಂತೆ ಆಸಕ್ತ ಫಲಾನುಭವಿಗಳು ರೈತರ ವಂತಿಕೆಯನ್ನು ಮತ್ತು ನಿಗದಿತ ನಮೂನೆಯಲ್ಲಿ, ಅರ್ಜಿಯನ್ನು ಭರ್ತಿಮಾಡಿ ಸಂಬಂಧಿಸಿದ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಿ ಸದರಿ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬಹುದು. ಸಲ್ಲಿಸಬೇಕಾದ ದಾಖಲೆಗಳು * ತೆಂಗು ಅಭಿವೃದ್ಧಿ ಮಂಡಳಿಯ ನಿಗದಿತ ಅರ್ಜಿ ನಮೂನೆ * ಆಧಾರ್ಕಾರ್ಡ್ ಪ್ರತಿ * ಬ್ಯಾಂಕ್ ಪಾಸ್ ಪುಸ್ತಕ ಪ್ರತಿ * ರೈತರ ವಂತಿಕೆ. ರೈತರು ತೆಂಗು ಬೆಳೆ ವಿಮೆಯ ವಾರ್ಷಿಕ ವಂತಿಕೆಯನ್ನು ಸಂಬಂಧಿಸಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು.

Leave a Reply

Your email address will not be published. Required fields are marked *