ಮೈಸೂರು || ಕೆ ಎನ್ ರಾಜಣ್ಣನವರಿಗೆ ರಾಜೇದ್ರ ಸಾಥ್ : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು..?

ಮೈಸೂರು || ಕೆ ಎನ್ ರಾಜಣ್ಣನವರಿಗೆ ರಾಜೇದ್ರ ಸಾಥ್ : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು..?

ಮೈಸೂರು :  ಸಹಕಾರ ಸಚಿವ ಕೆ. ಎನ್ ರಾಜಣ್ಣ ಅವರ ಪುತ್ರ ಹಾಗೂ ಎಮ್ಎಲ್ಸಿ ಆರ್. ರಾಜೇಂದ್ರ ಮೈಸೂರು ಜಿಲ್ಲೆಯಲ್ಲಿ ನಡೆಸುತ್ತಿರುವ ಪ್ರವಾಸ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣವೆಂದರೆ ರಾಜಣ್ಣ ಕಳೆದ ಒಂದು ತಿಂಗಳಿನಿಂದ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಸ್ಥಾನಕ್ಕಾಗಿ ಆಸಕ್ತಿ ವಹಿಸಿರುವುದಾಗಿದೆ.

ಹನಿ ಟ್ರ್ಯಾಪ್ ಆರೋಪದ ಬಳಿಕ  ಸುದ್ದಿಯಲ್ಲಿರುವ ರಾಜೇಂದ್ರ

ಅಧಿವೇಶನದ ವೇಳೆ, ಸಚಿವ ರಾಜಣ್ಣ “ಹನಿ ಟ್ರ್ಯಾಪ್” ಮಾಡಲು ಯತ್ನಿಸಲಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ರಾಜೇಂದ್ರ ಮತ್ತಷ್ಟು ಸುದ್ದಿಗೆ ಬಂದಿದ್ದಾರೆ. ರಾಜೇಂದ್ರ ಈ ಕುರಿತು ಮಾತನಾಡಿ, ಹನಿ ಟ್ರ್ಯಾಪ್ನ ಹಿಂದೆ ದೊಡ್ಡ ವ್ಯಕ್ತಿ ಇದ್ದಾನೆ, ಮತ್ತು ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ ಎಂದಿದ್ದಾರೆ.

ಎಸ್ಟಿ ಸಮುದಾಯದ ನಾಯಕರ ಭೇಟಿ

ತುಮಕೂರು ಜಿಲ್ಲೆಯ ಪ್ರಮುಖ ಎಸ್ಟಿ ನಾಯಕರಲ್ಲಿ ಒಬ್ಬರಾಗಿರುವ ರಾಜೇಂದ್ರ ಗುರುವಾರದಿಂದ ಮೈಸೂರು ಪ್ರದೇಶದಲ್ಲಿ ಇದ್ದು, ವಿವಿಧ ಎಸ್ಟಿ ಸಮುದಾಯದ ನಾಯಕರನ್ನು ಭೇಟಿ ಮಾಡಿದ್ದಾರೆ. ಅವರು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಶುಕ್ರವಾರದಂದು ಕೂಡ ಹಲವಾರು ಎಸ್ಟಿ ನಾಯಕರ ಜೊತೆ ಮಾತನಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಣ್ಣನವರ ಆಸೆ..?

ತಂದೆ ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿರುವಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜೇಂದ್ರ, “ಅವರು ಹಿರಿಯ ಕಾಂಗ್ರೆಸ್ ನಾಯಕರು. ನಾಲ್ಕು ದಶಕಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಯುವ ಕಾಂಗ್ರೆಸ್ನಿಂದ ತಮ್ಮ ರಾಜಕೀಯ ಆರಂಭಿಸಿ, ಸಂಘಟನೆಯಿಂದ ಬಂದವರು. ಅವರಿಗೆ ಅವಕಾಶ ಸಿಕ್ಕರೆ, ಉತ್ತಮ ಕೆಲಸ ಮಾಡಬಲ್ಲರು. ನಾನು ಕೂಡಾ ಪಕ್ಷ ಬಲಪಡಿಸಲು ಅವರೊಂದಿಗೆ ಇರ್ತೀನಿ. ಆದರೆ, ಅಂತಿಮ ನಿರ್ಧಾರ ಕೇಂದ್ರ ನಾಯಕರದ್ದು ಎಂದು ಹೇಳಿದರು.

Leave a Reply

Your email address will not be published. Required fields are marked *