ತುಮಕೂರು || 120 ಕೋಟಿ ವೆಚ್ಚದಲ್ಲಿ ಮೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ವಿ. ಸೋಮಣ್ಣ ಶಂಕುಸ್ಥಾಪನೆ

ತುಮಕೂರು || 120 ಕೋಟಿ ವೆಚ್ಚದಲ್ಲಿ ಮೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ವಿ. ಸೋಮಣ್ಣ ಶಂಕುಸ್ಥಾಪನೆ

ತುಮಕೂರು:- ಅಂದಾಜು 120 ಕೋಟಿ ವೆಚ್ಚದಲ್ಲಿ ಮೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಗುದ್ದಲಿಪೂಜೆ ನೆರವೇರಿಸಿದರು.

ನಗರದ ಬಡವಾಡಿ ಗೇಟ್ ಬಳಿ 43.37 ಕೋಟಿ, ಬಡ್ಡಿಹಳ್ಳಿ ಗೇಟ್ ಬಳಿ 26.75 ಕೋಟಿ, ಮೈದಾಳ ಗೇಟ್ ಬಳಿ 57.31 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಬಡವಾಡಿ ಗೇಟ್ ಬಳಿ ಗುದ್ದಲಿಪೂಜೆ ನೆರವೇರಿಸಿದ ವಿ. ಸೋಮಣ್ಣ, ನಾನು ತುಮಕೂರು‌ಕ್ಷೇತ್ರಕ್ಕೆ ಸಂಸದನಾಗಿ ಆಯ್ಕೆಯಾದ ಬಳಿಕ‌ ಅಭಿವೃದ್ಧಿ ಕೆಲಸ ಮಾಡುವ ಭರವಸೆ ನೀಡಿದ್ದೇನೆ. ಅದರಂತೆ ಅಭಿವೃದ್ಧಿ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದರು.

Leave a Reply

Your email address will not be published. Required fields are marked *