ದಾಬಸ್‌ಪೇಟೆ || ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟ

ದಾಬಸ್ಪೇಟೆ || ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟ

ದಾಬಸ್‌ಪೇಟೆ : ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಆರೋಪ ಸಾಭೀತಾಗಿದ್ದು ಆರೋಪಿಗಳಿಗೆ ನೆಲಮಂಗಲ ತಾಲೂಕು ೨ನೇ ಹೆಚ್ಚುವರಿ ಸಿವಿಲ್ ಜಡ್ಸ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಚೈತ್ರಾ ಎಲ್. ಅವರು ಆರೋಪಿತರಿಗೆ  ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ.

ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ ೫೨೩/೨೦೧೧ರ ಪ್ರಕರಣದಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಆಲ್ವ್ ಎಸ್ಟೇಟ್ ನ ಆನಂದ ಆಳ್ವ (೨೭) ಈತನ ವಿರುದ್ದ ಅಪಘಾತದ ಪ್ರಕರಣ ಸಾಭೀತಾದ್ದರಿಂದ ಆರೋಪಿಗೆ ೬ ತಿಂಗಳು ಜೈಲು ಮತ್ತು ೨,೦೦೦ ರೂ ದಂಡ ವಿಧಿಸಿದ್ದಾರೆ.

ಅದೇ ರೀತಿ ಮತ್ತೊಂದು ನೆಲಮಂಗಲ ಸಂಚಾರ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ ೩೧೩/೨೦೧೩ ಪ್ರಕರಣದಲ್ಲಿ ತಮಿಳುನಾಡು ರಾಜ್ಯದ ವಿಲ್ಲೂಪುರಂ ಜಿಲ್ಲೆಯ ವನೂರು ತಾಲ್ಲೂಕಿನ ಪಿಲ್ಲೇಯಾರ್ ಕಯೋಳ ಸ್ಟ್ರೀಟ್ ಯಡೆಯಪೆಟ್ಟಿ ನಿವಾಸಿ ರತ್ನವೇಲು (೩೭) ಈತನ ವಿರುದ್ದ ಅಪಘಾತದ ಪ್ರಕರಣ ಸಾಭೀತಾದ್ದರಿಂದ ಆರೋಪಿಗೆ ೧ ತಿಂಗಳು ಜೈಲು ಮತ್ತು ೨,೦೦೦ ರೂ ದಂಡ ವಿಧಿಸಿದ್ದಾರೆ.

ಈ ಅಪರಾಧ ಪ್ರಕರಣಗಳನ್ನು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶೋಭಾ.ಟಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *