ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಶಾಕ್.!

ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಶಾಕ್.!

ಮಂಗಳೂರು – ಆತಂಕಕಾರಿ ಆರೋಗ್ಯ ವರದಿ

ಮಂಗಳೂರು : ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸುನಾಮಿಯಂತೆ ಅಪ್ಪಳಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಪ್ರಮಾಣದಲ್ಲಿ ಬರೋಬ್ಬರಿ ಶೇ. 120ರಷ್ಟು ಭಾರಿ ಏರಿಕೆಯಾಗಿರುವುದು ಇತ್ತೀಚಿನ ಆರೋಗ್ಯ ಅಂಕಿಅಂಶಗಳಿಂದ ಬಹಿರಂಗವಾಗಿದೆ. ಈ ಬಗ್ಗೆ ದಾಯ್ಜಿವರ್ಲ್ಡ್ ವರದಿಯನ್ನು ಮಾಡಿದೆ. ಇದಿಗ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಆರೋಗ್ಯ ಇಲಾಖೆಯು ಎರಡು ಅವಧಿಗಳ (ಏಪ್ರಿಲ್ 2024 – ಮಾರ್ಚ್ 2025 ಮತ್ತು ಏಪ್ರಿಲ್ 2025 – ಫೆಬ್ರವರಿ 2026) ನಡುವೆ ನಡೆಸಿದ ತುಲನಾತ್ಮಕ ವರದಿಯಲ್ಲಿ ಈ ಆಘಾತಕಾರಿ ಸತ್ಯ ಹೊರಬಂದಿದೆ. ಜಿಲ್ಲೆಯಲ್ಲಿ ಒಟ್ಟು ಹೃದಯಾಘಾತ ಪ್ರಕರಣಗಳ ಸಂಖ್ಯೆ 3,278 ರಿಂದ 7,212 ಕ್ಕೆ ಜಿಗಿದಿದೆ ಎಂದು ವರದಿ ಹೇಳಿದೆ.

ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಒಟ್ಟು ಪ್ರಕರಣಗಳು: 1,752 ರಿಂದ 3,320 ಕ್ಕೆ ಏರಿಕೆ.

STEMI (ತೀವ್ರ ಹೃದಯಾಘಾತ): 400 ರಿಂದ 908 ಕ್ಕೆ ಹೆಚ್ಚಳ.

ಇತರ ಹೃದಯಾಘಾತಗಳು: 1,352 ರಿಂದ 2,412 ಕ್ಕೆ ಏರಿಕೆ.

ಕೇವಲ ಮಂಗಳೂರು ಮಾತ್ರವಲ್ಲದೆ ಜಿಲ್ಲೆಯ ಇತರ ತಾಲೂಕುಗಳಲ್ಲೂ ಪ್ರಕರಣಗಳು ಹೆಚ್ಚುತ್ತಿವೆ:

ಬಂಟ್ವಾಳ ತಾಲೂಕು ಆಸ್ಪತ್ರೆ: 552 ರಿಂದ 850 ಪ್ರಕರಣಗಳು.

ಸುಳ್ಯ ತಾಲೂಕು ಆಸ್ಪತ್ರೆ: 664 ರಿಂದ 720 ಪ್ರಕರಣಗಳು.

ಬೆಳ್ತಂಗಡಿ ತಾಲೂಕು ಆಸ್ಪತ್ರೆ: 310 ರಿಂದ 350 ಪ್ರಕರಣಗಳು.

ಖಾಸಗಿ ಆಸ್ಪತ್ರೆಗಳ ಅಂಕಿಅಂಶಗಳನ್ನು ಗಮನಿಸಿದರೆ, ಅಲ್ಲಿಯೂ 1,972 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,056 ತೀವ್ರ ಸ್ವರೂಪದ ಹೃದಯಾಘಾತಗಳಾಗಿವೆ. ಕೇವಲ 11 ತಿಂಗಳ ಅವಧಿಯಲ್ಲಿ ಪ್ರಕರಣಗಳು ಇಷ್ಟೊಂದು ಪ್ರಮಾಣದಲ್ಲಿ ದ್ವಿಗುಣಗೊಂಡಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೀಡುಮಾಡಿದೆ. ಜೀವನಶೈಲಿ ಬದಲಾವಣೆ, ಆಹಾರ ಪದ್ಧತಿ ಅಥವಾ ಒತ್ತಡ ಇವುಗಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸಾರ್ವಜನಿಕರು ಎದೆಯ ನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *