ಮತಗಟ್ಟೆಗಳಲ್ಲಿ ಘರ್ಷಣೆ, ಏಜೆಂಟ್ ಮೇಲೆ ಹ* ಆರೋಪ; ತೃಣಮೂಲ ಕಾಂಗ್ರೆಸ್ ನಿರಾಕರಣೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನ ಆರಂಭವಾಗುತ್ತಿದ್ದಂತೆಯೇ ಹಲವು ಕ್ಷೇತ್ರಗಳಲ್ಲಿ ಹಿಂಸಾಚಾರ ಮತ್ತು ಅಡಚಣೆಗಳ ಘಟನೆಗಳು ವರದಿಯಾಗಿವೆ. ನಾಡಿಯಾ ಜಿಲ್ಲೆಯ ಛಪ್ರಾದಲ್ಲಿ ಬಿಜೆಪಿ ಏಜೆಂಟ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂಬ ಆರೋಪ ರಾಜಕೀಯ ತಾಪಮಾನವನ್ನು ಹೆಚ್ಚಿಸಿದೆ.
ಬಿಜೆಪಿ ಹೇಳಿಕೆಯ ಪ್ರಕಾರ, ಏಜೆಂಟ್ ಮೊಶರೆಫ್ ಮಿರ್ ಮೇಲೆ ಬಂದೂಕು ಮತ್ತು ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
ಹಲವೆಡೆ ಇವಿಎಂ ಯಂತ್ರಗಳಲ್ಲಿ ತಾಂತ್ರಿಕ ದೋಷ ಉಂಟಾಗಿ ಮತದಾನ ಆರಂಭ ವಿಳಂಬವಾಗಿದೆ. ಇದರಿಂದ ಮತದಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.ಭದ್ರತಾ ವ್ಯವಸ್ಥೆ ಇದ್ದರೂ ಕೆಲವೆಡೆ ಘರ್ಷಣೆಗಳು ಮತ್ತು ಅಸಮಾಧಾನ ಮುಂದುವರಿದಿದ್ದು, ಮತದಾನ ಪ್ರಕ್ರಿಯೆ ಅಸ್ಥಿರ ವಾತಾವರಣದಲ್ಲಿ ಸಾಗುತ್ತಿದೆ.
ಈ ಎಲ್ಲಾ ಆರೋಪಗಳನ್ನು ತೃಣಮೂಲ ಕಾಂಗ್ರೆಸ್ ತಳ್ಳಿಹಾಕಿದ್ದು, ಅವು ರಾಜಕೀಯ ಪ್ರೇರಿತ ಎಂದು ಹೇಳಿದೆ.
For More Updates Join our WhatsApp Group :




